`ಬದ್ಮಾಶ್`ಗೆ ಸೆನ್ಸಾರ್ ಅಸ್ತು
Posted date: 14 Wed, Sep 2016 – 12:07:25 PM

ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ಅವರು ನಿರ್ಮಿಸಿರುವ ‘ಬದ್ಮಾಶ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ.  ಚಿತ್ರ ದಸರಾದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶ್ರೀಷ ಕುದುವಳ್ಳಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ವಿನೊದ್, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಶಂಕರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ‘ಬದ್ಮಾಶ್ಗೆ ಆಕಾಶ್ ಶ್ರೀವತ್ಸ ಕಥೆ, ಪ್ರಶಾಂತ್, ಸಂತೋಷ್ ಗೋಪಾಲ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಶ್ರೀವತ್ಸ, ವಿನೋದ್ ಕುಮಾರ್ ಹಾಗೂ ಪ್ರತೀಕ್ ಸಂಭಾಷಣೆ ಬರೆದಿದ್ದಾರೆ.
   ಧನಂಜಯ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಚಿತಾ ಶೆಟ್ಟಿ. ಅಚ್ಯುತಕುಮಾರ್, ಜಹಂಗೀರ್, ರಮೇಶ್ ಭಟ್, ರಮೇಶ್ ಪಂಡಿತ್, ಬಿ.ಸುರೇಶ್, ಪ್ರಕಾಶ್ ಬೆಳವಾಡಿ, ಶ್ರೀನಿವಾಸ ಪ್ರಭು, ಬಿರಾದಾರ್, ಸುಚೇಂದ್ರ ಪ್ರಸಾದ್, ಪನ್ನಗಾಭರಣ, ಲಕ್ಷ್ಮೀ ಆನಂದ್, ಬೆಂಗಳೂರು ನಾಗೇಶ್, ಎಂ.ಎಸ್.ಉಮೇಶ್, ಗೌರೀಶ್ ಅಕ್ಕಿ, ಅವಿನಾಶ್ ಶೆಟ್ಟಿ, ಕರಡಿ ಸೋಮ, ಸೂರ್ಯ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed